ಪರಿಸ್ಥಿತಿಗೆ ಸ್ಪಂದಿಸದೆ, ದುರ್ಘಟನೆಯ ದೃಶ್ಯವನ್ನು ಮೊಬೈಲಿನಲ್ಲಿ ಚಿತ್ರೀಕರಿಸಿ ರವಾನಿಸುವ ವಿಕೃತಿಯನ್ನು ಕೆಲವರು ಮೆರೆಯುತ್ತಾರೆ. ಇದೊಂದು ಕೆಟ್ಟ ಚಾಳಿ. ತೊಂದರೆಗೆ ಸಿಲುಕಿದವರಿಗೆ ಸಹಾಯಹಸ್ತ ಚಾಚುವ ಮಾನವೀಯ ಗುಣ ನಮ್ಮಲ್ಲಿರಬೇಕೇ ವಿನಾ, ಇಂಥ ರಾಕ್ಷಸ ಪ್ರವೃತ್ತಿ ನಾಗರಿಕ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ. ನಮ್ಮೊಳಗಿನ ವಿವೇಕ ಜಾಗೃತವಾದಾಗ ಮಾತ್ರ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬಹುದು.
–ಧರ್ಮಾನಂದ ಶಿರ್ವ, ಬೆಂಗಳೂರು