ಮಂಗಳೂರು ನಗರಕ್ಕೆ ಬಂದ ಕಾಡುಕೋಣವನ್ನು ಅರಿವಳಿಕೆ ಚುಚ್ಚುಮದ್ದು ನೀಡಿ ಹಿಡಿಯುವ ಆತುರದಲ್ಲಿ ಅದು ಸಾವೀಗಿಡಾಗಿದೆ. ಅರಿವಳಿಕೆ ನೀಡುವ ಬದಲು, ಸ್ವಲ್ಪ ಎಚ್ಚರ ವಹಿಸಿ ಹಾಗೆಯೇ ಬೆದರಿಸಿ ಕಾಡಿಗೆ ಓಡಿಸುವ ಕೆಲಸ ಆಗಬೇಕಿತ್ತು.
ಹಾದಿತಪ್ಪಿ ನಾಡಿಗೆ ಬರುವ ಕಾಡುಪ್ರಾಣಿಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಕಲೆಯನ್ನು ಇನ್ನೂ ಕಲಿಯದ ನಾಡಿನ ಕೋಣಗಳು ನಾವಾಗಿದ್ದೇವೆ. ಇನ್ನಾದರೂ ಎಚ್ಚರಿಕೆ ಇರಲಿ.