ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಲ್ಲಡಗಿರುವುದಕ್ಕೆ ಬೇರೆ ಕಾರಣವಿದೆ!

ಅಕ್ಷರ ಗಾತ್ರ

‘ಬೆಲೆಯೇರಿಕೆ: ಸೊಲ್ಲೆತ್ತದವರ ಕೊಡುಗೆ!’ ಲೇಖನದಲ್ಲಿ (ಸಂಗತ, ಅ. 12) ಡಾ. ಎಂ.ವೆಂಕಟಸ್ವಾಮಿ ಅವರು ‘ಸಂಕಷ್ಟ ಅನುಭವಿಸುತ್ತಿರುವ ಜನರೇಕೆ ಇದರ ವಿರುದ್ಧ ದನಿ ಎತ್ತುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಹಾಗೇನೂ ಇಲ್ಲ. ಸೆಪ್ಟೆಂಬರ್‌ 27ರಂದು ನಡೆದ ‘ಭಾರತ್ ಬಂದ್‌’ನಲ್ಲಿ ಇಡೀ ದೇಶವೇ ಈ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದೆ. ಆದರೆ ಸರ್ಕಾರ ಮಾತ್ರ ಅಂಥ ಪ್ರತಿಭಟನೆಗೆ ಸ್ಪಂದಿಸದೆ ಇಂಧನ ಬೆಲೆ ಏರಿಸುತ್ತಲೇ ಇದೆ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಅದೇನೆಂದರೆ ಆಡಳಿತ ಪಕ್ಷಕ್ಕೆ ಸ್ಪಷ್ಟ ಬೆಂಬಲವಿರುವುದು ಒಂದಾದರೆ, ಮತ್ತೊಂದು ಕಾರಣ ಬಲಿಷ್ಠವಾದ ವಿರೋಧ ಪಕ್ಷ ಇಲ್ಲದಿರುವುದಾಗಿದೆ.

ಈ ನಡುವೆ ಬೆಲೆ ಏರಿಕೆಯ ನೇರ ಪರಿಣಾಮ ಅನುಭವಿಸುತ್ತಿರುವ ರೈತ ಕೂಲಿಕಾರರು ನಿಜಕ್ಕೂ ದನಿ ಎತ್ತಲಾರದಷ್ಟು ನಿಶ್ಶಕ್ತರಾಗಿದ್ದಾರೆ! ಇಂತಹ ಪರಿಸ್ಥಿತಿಯಿಂದಾಗಿ ಬೆಲೆ ಏರಿಕೆ ನಿತ್ಯವಾಗಿದೆ. ಆದರೆ ಮತ ದಾರರು ಮಾತ್ರ ಚುನಾವಣೆ ಬಂದಾಗ ಬೆಲೆ ಏರಿಕೆಗೆ ಕಾರಣವಾದ ಪಕ್ಷಕ್ಕೆ ಪಾಠ ಕಲಿಸುತ್ತಾರೆಂಬ ವಿಶ್ವಾಸವೂ ಹೋರಾಟಗಾರರಿಗಿದೆ. ಸರಿ ತಾನೆ?

- ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT