‘ಬೆಲೆಯೇರಿಕೆ: ಸೊಲ್ಲೆತ್ತದವರ ಕೊಡುಗೆ!’ ಲೇಖನದಲ್ಲಿ (ಸಂಗತ, ಅ. 12) ಡಾ. ಎಂ.ವೆಂಕಟಸ್ವಾಮಿ ಅವರು ‘ಸಂಕಷ್ಟ ಅನುಭವಿಸುತ್ತಿರುವ ಜನರೇಕೆ ಇದರ ವಿರುದ್ಧ ದನಿ ಎತ್ತುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಹಾಗೇನೂ ಇಲ್ಲ. ಸೆಪ್ಟೆಂಬರ್ 27ರಂದು ನಡೆದ ‘ಭಾರತ್ ಬಂದ್’ನಲ್ಲಿ ಇಡೀ ದೇಶವೇ ಈ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದೆ. ಆದರೆ ಸರ್ಕಾರ ಮಾತ್ರ ಅಂಥ ಪ್ರತಿಭಟನೆಗೆ ಸ್ಪಂದಿಸದೆ ಇಂಧನ ಬೆಲೆ ಏರಿಸುತ್ತಲೇ ಇದೆ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಅದೇನೆಂದರೆ ಆಡಳಿತ ಪಕ್ಷಕ್ಕೆ ಸ್ಪಷ್ಟ ಬೆಂಬಲವಿರುವುದು ಒಂದಾದರೆ, ಮತ್ತೊಂದು ಕಾರಣ ಬಲಿಷ್ಠವಾದ ವಿರೋಧ ಪಕ್ಷ ಇಲ್ಲದಿರುವುದಾಗಿದೆ.