ಕುದಿಯುತ್ತಿದೆ ಭೂಮಿ (ಪ್ರ.ವಾ., ಡಿ. 4) ಮತ್ತು ಮುಂದಿದೆ ಕರಾಳ ದಿನ (ಪ್ರ.ವಾ., ನ. 21) ಸುದ್ದಿಗಳನ್ನು ಓದಿ ಗಾಬರಿಯಾಯಿತು. ಇಂತಹ ದುರದೃಷ್ಟಕರ ಕಾಲವನ್ನು ಮುಂದಿನ ಪೀಳಿಗೆ ಎದುರಿಸಬೇಕಾಗಿ ಬಂದಿರುವುದನ್ನು ತಿಳಿದರೆ ವಿಷಾದವಾಗುತ್ತದೆ. ಮೋಜು- ಮಸ್ತಿ, ಭೋಗವೇ ಜೀವನವೆನ್ನುವ ರೋಗಗ್ರಸ್ತ ಕಾಲವಿದು. ಮನುಷ್ಯನ ಪ್ರಜ್ಞೆ, ಸಂವೇದನಾಶೀಲತೆ ಜಡ್ಡುಗಟ್ಟಿದ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಅದನ್ನು ಸರಿಪಡಿಸಲು ಈಗ ಕೈಗೊಂಡಿರುವ ಕ್ರಮಗಳು ಏನೇನೂ ಸಾಲವು. ಇದು ಕ್ಯಾನ್ಸರ್ ರೋಗಕ್ಕೆ ಆಸ್ಪಿರಿನ್ ಕೊಟ್ಟಂತೆ.