ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಭಾನುವಾರ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ ಕರ್ನಾಟಕ ಸರ್ಕಾರದ ಜಾಹೀರಾತು ವಿವಾದಿತ ಎನ್ನದೇ ವಿಧಿಯಿಲ್ಲ. ಯಾರಾದರೂ ತಪ್ಪಿ ನಡೆದರೆ ಉತ್ತರ ಕರ್ನಾಟಕದ ಆಡು ಮಾತಿನಲ್ಲಿ ‘ಇದು ಧರ್ಮ ಅಲ್ಲ ಲೇ, ತಮ್ಮಾ’ ಎಂದು ಬುದ್ಧಿ ಹೇಳುವುದುಂಟು. ಸದರಿ ಜಾಹೀರಾತಿನಲ್ಲಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಂತಿದೆ. ಹಾಗಾದರೆ ದೇಶಕ್ಕೆ ನೆಹರೂ ಅವರ ಕೊಡುಗೆ ಏನೇನೂ ಇಲ್ಲವೆ?