ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ತಂದೆ- ತಾಯಿಯನ್ನು ಕಳೆದುಕೊಂಡಿರುವ ಬಾಲಕನೊಬ್ಬ, ರ್ಶ್ವವಾಯು
ಪೀಡಿತ ಅಕ್ಕನ ಆರೈಕೆಗಾಗಿ ಶಾಲೆಯನ್ನೇ ತೊರೆದಿದ್ದಾನೆ(ಪ್ರ.ವಾ., ಫೆ. 27). ಇದನ್ನು ತಿಳಿದು, ಹಲವರು ಈ ಮಕ್ಕಳಿಗೆ ನೆರವಿನ ಹಸ್ತ ಚಾಚಲು ಮುಂದಾಗಿರುವುದನ್ನು ತಿಳಿದು ಎದೆ ತುಂಬಿಬಂತು. ಹಿಂದೆ ಮುಂದೆ ನೋಡದೇ, ಜಾತಿ, ಮತ, ಭಾಷೆ ಕೇಳದೇ, ನೊಂದವರಿಗೆ, ಕಷ್ಟದಲ್ಲಿ ಇರುವವರಿಗೆ ನೆರವು ನೀಡುವ ಕೈಗಳಿಗೆ ಕರುನಾಡಿನಲ್ಲಿ ಬರವಿಲ್ಲ. ಪೋಷಕರಿಲ್ಲದೇ ಅಂಗವಿಕಲ ಅಕ್ಕನ ಆರೈಕೆಗಾಗಿ ಓದಿಗೆ ತಿಲಾಂಜಲಿ ಇಟ್ಟಿದ್ದ ತಮ್ಮನ ತ್ಯಾಗಕ್ಕೆ ಇಂಥ ಮಾನವೀಯತೆ ಮಿಡಿದಿದೆ. ಮಾನವತೆಯ ಸಾಕಾರಮೂರ್ತಿಗಳ ಈ ಕೊಡುಗೈ ಕೈಂಕರ್ಯಕ್ಕೆ ಮನುಷ್ಯರಾದವರು ತಲೆ ಬಾಗಲೇಬೇಕು. ಮಾನವೀಯತೆ ಸತ್ತಿಲ್ಲ, ಸಾಯುವುದೂ ಇಲ್ಲ. ಅದೇ ಬದುಕು, ಅದೇ ಪಾಠ, ಅದೇ ಭಾರತೀಯ ಪರಂಪರೆ.