‘ಕನ್ನಡಕ್ಕೆ ಕುಠಾರಸ್ವಾಮಿ ಆಗಬೇಡಿ’ ಎಂದು ಚಂಪಾ ಅವರು ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಸಮ್ಮೇಳನದಲ್ಲಿ ಗಲಾಟೆ ಬೇಡ ಎಂದು ಸುಮ್ಮನಾದೆ’ ಎಂದಿದ್ದಾರೆ. ಮುಖ್ಯಮಂತ್ರಿಯ ಈ ಪ್ರತಿಕ್ರಿಯೆ ಅವರ ಘನತೆಗೆ ತಕ್ಕುದಲ್ಲ.
ನಾಡಿನ ಮುಖ್ಯಮಂತ್ರಿಗೆ ಸಲಹೆ ಸೂಚನೆಗಳನ್ನು ನೀಡುವುದು, ದಾರಿ ತಪ್ಪಿದಾಗ ಟೀಕಿಸುವುದು ನಾಗರಿಕರ ವಿಶೇಷವಾಗಿ ಸಾಹಿತಿ, ಬುದ್ಧಿಜೀವಿಗಳ ಹಕ್ಕು. ಅದನ್ನು ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ವೀಕರಿಸಬೇಕು.
ಒಂದು ವರ್ಗದ ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಇಂಗ್ಲಿಷ್ ಮೇಲೆ ಪ್ರೀತಿ ಇದೆ ಎಂಬ ಕಾರಣಕ್ಕೆ ಇಂಗ್ಲಿಷ್ ಮಾಧ್ಯಮದಲ್ಲೇ ಶಿಕ್ಷಣ ಕೊಡಲು ಆರಂಭಿಸಿದರೆ ಕನ್ನಡವನ್ನು ಕೇಳುವವರು ಯಾರು?