ರಾಜಕಾರಣ ಈಗ ಕೌಟುಂಬಿಕ ದಂಧೆ ಆಗಿದೆ. ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು ಎನ್ನುವ ಒಬ್ಬ ವ್ಯಕ್ತಿ ಸ್ಪರ್ಧಿಸಲಾರದಷ್ಟು ಚುನಾವಣೆ ಕಣವನ್ನು ರಾಜಕೀಯ ಪಕ್ಷಗಳು ಹದಗೆಡಿಸಿ ಇಟ್ಟಿವೆ. ಹೀಗಾಗಿ ಹಾಲಿ ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳೇ ಸ್ಪರ್ಧಿಸಬೇಕು.ಅವರು ಸತ್ತರೆ ಅವರ ಹೆಂಡತಿ ಸ್ಪರ್ಧಿಸಬೇಕು. ಪ್ರಜಾಪ್ರಭುತ್ವದ ಹೆಸರಿನಲ್ಲಿ ವಂಶಪಾರಂಪರ್ಯ ಆಳ್ವಿಕೆ. ಚುನಾಯಿತ ಹುದ್ದೆಗಳನ್ನು ಎರಡು ಅವಧಿಗೆ ಮಿತಗೊಳಿಸಿ ನಮ್ಮ ಪ್ರಜಾಪ್ರಭುತ್ವವನ್ನು ನಾವು ರಕ್ಷಿಸಿಕೊಳ್ಳದಿದ್ದರೆ ದೇಶದ ತುಂಬೆಲ್ಲ ಕೌಟುಂಬಿಕ ರಾಜಕಾರಣಿಗಳನ್ನು, ಪ್ರಜಾಪ್ರಭುತ್ವದ ಅಣಕು ಪ್ರದರ್ಶನವನ್ನೇ ನಾವು ನೋಡುತ್ತಾ ಇರಬೇಕಾಗುತ್ತದೆ.