ಕೆಲವೇ ರೂಪಾಯಿಗಳನ್ನು, ಭಾವಚಿತ್ರ ಮತ್ತು ಕೆಲ ದಾಖಲೆಗಳನ್ನು ನೀಡಿ ಸದಸ್ಯತ್ವ ಪಡೆಯಿರಿ ಎಂದರೇನೆ ಹಿಂದೆ ಸರಿಯುವ ಜನರು, ಇನ್ನು ಪರೀಕ್ಷೆ ಎದುರಿಸಿ ಸದಸ್ಯರಾಗುವುದು ಕನಸಿನ ಮಾತೇ ಸರಿ. ಹೊಸ ಕಾನೂನುಗಳನ್ನು ಮಾಡುವ, ಇರುವ ಕಾನೂನುಗಳಿಗೆ ತಿದ್ದುಪಡಿ ತರುವ ಲೋಕಸಭಾ ಅಥವಾ ವಿಧಾನಸಭಾ ಸದಸ್ಯರಾಗಲು, ಪುರ ಸಭೆಯ ಸದಸ್ಯರಾಗಲು ಇಲ್ಲದ ಯಾವುದೇ ಪರೀಕ್ಷೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯಲು ಎದುರಿಸ ಬೇಕೆಂಬುದು ಅರ್ಥಹೀನ. ಇದು ನಿಜವೇ ಆದರೆ ಈ ಆದೇಶ ಹಿಂಪಡೆದು, ಈಗಿರುವಂತೆಯೇ ಸದಸ್ಯತ್ವ ನೀಡಲಿ. ಕನ್ನಡ ನಾಡು, ನುಡಿ, ಜಲ ಮುಂತಾದ ಕುರಿತು ಬಹಳಷ್ಟು ಕೆಲಸಗಳು ಇವೆ. ಅವನ್ನು ಆದ್ಯತೆ ಮೇರೆಗೆ ಮಾಡಿ ಜನ ಮನ್ನಣೆ ಗಳಿಸಲಿ.