ರಾಜಕೀಯದ ಬಗ್ಗೆ ಆಸಕ್ತಿ, ತಮ್ಮ ಸಮುದಾಯದ ಮೇಲೆ ಅಷ್ಟೊಂದು ಆಸ್ಥೆ ಇದ್ದರೆ ಕಾವಿ ಕಳಚಿ ಖಾದಿ
ಧರಿಸಿ, ರಾಜಕೀಯಕ್ಕೆ ಬರಲಿ. ಇಂಥ ಒತ್ತಡ ತಂತ್ರಗಳನ್ನುಬಳಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಇದು ವಿವೇಕವಂತರು, ರಾಜಕೀಯ ಪರಿಜ್ಞಾನ ಇರುವವರು ಹಾಗೂ ಪ್ರಜಾಪ್ರಭುತ್ವದ ಆಶಯಗಳ ಕುರಿತು ಅರಿವಿರುವವರು ಮಾತನಾಡುವಂಥದ್ದಲ್ಲ. ಇದನ್ನು ಪರೋಕ್ಷ ‘ಬ್ಲ್ಯಾಕ್ಮೇಲ್’ ಅನ್ನದೇ ವಿಧಿಯಿಲ್ಲ.