ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿಯಲಿ ಜೀವಾಮೃತ ನದಿಗಳು

Last Updated 18 ಜನವರಿ 2022, 15:18 IST
ಅಕ್ಷರ ಗಾತ್ರ

ನದಿಗಳು ಜೀವಸಂಕುಲದ ತಾಣಗಳು. ಮೂರ್ನಾಲ್ಕು ದಶಕಗಳ ಹಿಂದೆ ನದಿಗಳು ವರ್ಷದುದ್ದಕ್ಕೂ ತುಂಬಿ ಹರಿಯುತ್ತಿದ್ದವು. ಜೊತೆಗೆ ತೀರ ಮಾಲಿನ್ಯಯುತವಾಗಿಯೇನೂ ಇರಲಿಲ್ಲ. ಆದರೆ, ಕಳೆದ ಎರಡು ದಶಕಗಳಲ್ಲಿ ನದಿಗಳ ನೀರು ತೀವ್ರ ಮಲಿನವಾಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮೈದುಂಬಿ ಹರಿಯುತ್ತಿದ್ದ ಫಲ್ಗುಣಿ ನದಿಯೂ ಕಾರ್ಖಾನೆಗಳ ವಿಷಕಾರಿ ತ್ಯಾಜ್ಯದಿಂದ ಮಲಿನವಾಗಿರುವುದನ್ನು ನೋಡಿದರೆ ಭವಿಷ್ಯದ ಬಗ್ಗೆ ಆತಂಕ ಮೂಡುತ್ತದೆ. ರಾಜ್ಯದ ಹಲವು ಜೀವನದಿಗಳು ವಿಷಕಾರಿ ರಾಸಾಯನಿಕ ವಸ್ತುಗಳು ಮತ್ತು ತ್ಯಾಜ್ಯಗಳಿಂದ ತಮ್ಮ ಹರಿಯುವಿಕೆಯನ್ನು ನಿಲ್ಲಿಸಿ, ಹೆಪ್ಪುಗಟ್ಟಿ ನಿಲ್ಲುವ ಹಂತಕ್ಕೆ ಬರುತ್ತಿವೆ.

ಹರಿಹರ ಮತ್ತು ರಾಣೆಬೆನ್ನೂರಿನ ಮಧ್ಯೆ ಹರಿಯುವ ತುಂಗಭದ್ರಾ ನದಿಯೂ ತುಂಬಾ ಕಲುಷಿತಗೊಂಡಿದೆ. ಇಕ್ಕೆಲಗಳ ಗ್ರಾಮಸ್ಥರು ಶ್ವಾಸಕೋಶ ಸೇರಿದಂತೆ ಇನ್ನಿತರ ತೊಂದರೆಗಳಿಂದ ಬಳಲುತ್ತಿದ್ದಾರೆ. ಇಂತಹ ದೊಡ್ಡ ದೊಡ್ಡ ನದಿಗಳ ಪರಿಸ್ಥಿತಿ ಹೀಗಾದರೆ ಸಣ್ಣ ನದಿಗಳು ಮತ್ತು ಹಳ್ಳಕೊಳ್ಳಗಳ ಪರಿಸ್ಥಿತಿ ಊಹಿಸಬಹುದಾಗಿದೆ. ಈ ದಿಸೆಯಲ್ಲಿ ಆಳುವ ವರ್ಗದ ಜೊತೆಗೆ ಜನರು ಸಹ ಜೀವಾಮೃತ ನದಿಗಳ ಉಳಿವಿಗಾಗಿ ಎಚ್ಚರಿಕೆ ವಹಿಸಬೇಕಾಗಿದೆ.

ಮಲ್ಲಪ್ಪ ಫ. ಕರೇಣ್ಣನವರ,ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT