‘ಶಿವ’ ನಾಟಕ ಪ್ರದರ್ಶನಕ್ಕೆ ವಿಶ್ವ ಹಿಂದೂ ಪರಿಷತ್ತಿನಕಾರ್ಯಕರ್ತರು ತಡೆ ಒಡ್ಡಿದ ಸುದ್ದಿಗೆ (ಪ್ರ.ವಾ., ಅ.15)
ಈ ಪ್ರತಿಕ್ರಿಯೆ. ಆ ಸಂಘಟನೆಯ ಮೂರು ತಂಡಗಳು ಜಾಗೃತಿ ರಂಗಮಂದಿರಕ್ಕೆ ಹೋಗಿ ಹೇಗೆ ಬೆದರಿಕೆ ಒಡ್ಡಿವೆ ಎಂಬುದೂ ಬೇರೆ ಬೇರೆ ಕಡೆಗಳಲ್ಲಿ ಸುದ್ದಿಯಾಗಿದೆ. ಎಲ್ಜಿಬಿಟಿಕ್ಯೂ ಜನರ ಕಷ್ಟಸುಖಗಳನ್ನು ನಾಟ್ಯವಾಗಿಸುವ ಪ್ರಯೋಗವನ್ನು– ಯಾವುದೇ ವಿಷಯ, ಯಾವುದೇ ಕಥೆಯುಳ್ಳ ಯಾವುದೇ ಪ್ರಯೋಗವನ್ನು– ಹೀಗೆಲ್ಲ ತಡೆಯುವುದು ಸರ್ವಥಾ ಸರಿಯಲ್ಲ. ಅಚ್ಚರಿಯ ಮಾತೆಂದರೆ, ಪೊಲೀಸರು ಆ ಸಂಘಟನೆಯ ಯಾರನ್ನೂ ಬಂಧಿಸದೆ, ಮರೆವೆಗೆ ಸಂದ, ಆದರೆ ಜೀವಂತವಿರುವ ಬ್ರಿಟಿಷರ ಕಾಲದ ಕರಾಳ ಕಾನೂನೊಂದನ್ನು ಆಧರಿಸಿ ಆ ಪ್ರದರ್ಶ
ನದ ಮೇಲೆಯೇ ನಿರ್ಬಂಧ ಹೇರಿದ್ದಾರೆ; ಮತ್ತು ಆ ನಾಟಕದ ಪ್ರಯೋಗಕ್ಕೆ ಅನುಮತಿ ಬೇಕಾದರೆ, ಅದರ ಸಾಹಿತ್ಯದ ಪಾಠವನ್ನು ತಾವು ಮೊದಲು ಪರಿಶೀಲಿಸಬೇಕೆಂದು ಹೇಳಿದ್ದಾರೆ! ಅಸಂಗತ ನಡವಳಿಕೆ ಮತ್ತು ತೀರ್ಮಾನ ಅದು.