ಭೂತದ ಕೋಲ ನಡೆಸುವ ನರ್ತನಕಾರರಿಗೆ ಮಾಸಾಶನ ಮಂಜೂರು ಮಾಡಿರುವುದು ಅತ್ಯಂತ ಶ್ಲಾಘನೀಯ. ಅದೇ ರೀತಿ ಉತ್ತರ ಕರ್ನಾಟಕದ ವಿವಿಧ ದೇವಸ್ಥಾನಗಳಲ್ಲಿ ವರ್ಷಕ್ಕೊಮ್ಮೆಯೋ ಎರಡು ಬಾರಿಯೋ ಕಾರಣಿಕ ನುಡಿಯುವ ಗೊರವಪ್ಪಗಳಿದ್ದಾರೆ. ದೈವಾರಾಧನೆಯನ್ನೇ ತಮ್ಮ ಬದುಕಿನ ನೆಲೆಯಾಗಿಸಿಕೊಂಡ ಇಂತಹ ಗೊರವಪ್ಪ ಗಳಿಗೂ ಸರ್ಕಾರವು ಮಾಸಾಶನ ಮಂಜೂರು ಮಾಡಿ, ಅವರ ಬದುಕಿಗೆ ನೆಮ್ಮದಿ ಉಂಟು ಮಾಡಲು ಕ್ರಮ ಜರುಗಿಸಬೇಕು.