ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಮೋಘ ಆಟ, ನೆನಪು ಅಮರ

ಅಕ್ಷರ ಗಾತ್ರ

ಟಿ20 ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಭಾರತ– ಪಾಕಿಸ್ತಾನ ಕ್ರಿಕೆಟ್ ಪಂದ್ಯದ ರೋಚಕ ಹಣಾಹಣಿಯಲ್ಲಿ ವಿರಾಟ್‌ ಕೊಹ್ಲಿ ಅವರ ಅಮೋಘ ಆಟದಿಂದಾಗಿ ಭಾರತ ಗೆಲುವು ಸಾಧಿಸಿತು. ಬ್ಯಾಟಿಂಗ್‌ ಲಯ ಕಳೆದುಕೊಂಡಿದ್ದ ಕೊಹ್ಲಿ, ಎರಡು–ಮೂರು ತಿಂಗಳುಗಳಿಂದ ತಮ್ಮ ನೈಜ ಆಟಕ್ಕೆ ಮರಳಿರುವುದು ಸಂತಸದಾಯಕ. ಚೇಸಿಂಗ್‌ನಲ್ಲಿ ಸುಂದರವಾಗಿ ಇನಿಂಗ್ಸ್ ಕಟ್ಟಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಕ್ರಿಕೆಟ್‌ ಇತಿಹಾಸದಲ್ಲಿ ಖ್ಯಾತನಾಮರಾದ ಬ್ಯಾಟರ್‌ಗಳ ನಡುವೆ ಕೊಹ್ಲಿ ಅವರ ಸಾಧನೆ ವಿಶಿಷ್ಟವಾದುದು.

ಮೆಲ್ಬರ್ನ್‌ನ ಬೃಹತ್ ಕ್ರೀಡಾಂಗಣದಲ್ಲಿ 90 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಎದುರು ಭಾರತ ತಂಡವು ಸೋಲಿನ ದವಡೆಯಲ್ಲಿದ್ದಾಗ, ಜವಾಬ್ದಾರಿಯಿಂದ ಆಡಿ ಪಂದ್ಯವನ್ನು ಗೆಲ್ಲಿಸಿದ ಕೊಹ್ಲಿ ಅವರ ಕೆಚ್ಚೆದೆಯ ಆಟಕ್ಕೆ ವಿಶ್ವದಾದ್ಯಂತ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಪಾಕಿಸ್ತಾನ ತಂಡದ ವಿರುದ್ಧ ಕೊಹ್ಲಿ ಅವರ ಈ ಆಟವು ಕ್ರೀಡಾಭಿಮಾನಿ
ಗಳಲ್ಲಿ ಮಧುರ ನೆನಪಾಗಿ ಉಳಿಯಲಿದೆ.

-ಅನಿಲ್ ಕುಮಾರ್,ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT