ಆಗಸ್ಟ್ ಹದಿನೈದರಂದು ನನ್ನ ವಾಟ್ಸ್ಆ್ಯಪ್ ಖಾತೆಗೆ ಸ್ನೇಹಿತರು ಒಂದು ಫೋಟೊ ಕಳಿಸಿದ್ದರು. ಹರಿದ ಬಟ್ಟೆಯ ಅರೆ ಬೆತ್ತಲೆಯ ಎಂಟು– ಹತ್ತು ಬಡ ಹುಡುಗರು ಭಾರತೀಯ ಧ್ವಜದ ಸುತ್ತ ನಿಂತು ಧ್ವಜವಂದನೆ ಸಲ್ಲಿಸುವ ಚಿತ್ರ ಅದು. ಆ ಹುಡುಗರಲ್ಲಿ ಐದಾರು ವರ್ಷ ವಯಸ್ಸಿನ ಹುಡುಗನೊಬ್ಬ ಸಂಪೂರ್ಣ ಬೆತ್ತಲೆ ಇದ್ದ. ಆ ಫೋಟೊ ನೋಡಿ ನನಗೆ ಕವಿ ಸಿದ್ಧಲಿಂಗಯ್ಯ ಅವರ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಕವಿತೆ ನೆನಪಿಗೆ ಬಂದು, ಈ ಸಾಲುಗಳೊಡನೆ ಚಿತ್ರವನ್ನು ಕೆಲವು ಗೆಳೆಯರಿಗೆ ಕಳುಹಿಸಿದೆ.