ಸರ್ಕಾರಿ ಕಾರ್ಯಕ್ರಮಗಳಿಗೆ ಅನ್ವಯವಾಗುವಂತೆ ಹೂಗುಚ್ಛ, ಹೂವಿನ ಹಾರ ನಿಷೇಧದ ಆದೇಶ ಸರಿಯಾಗಿದೆ. ಇದರ ಬದಲಿಗೆ ಪುಸ್ತಕಗಳನ್ನು ಕೊಡುವ ಸಂಸ್ಕೃತಿ ಬೆಳೆಸುವುದು ಸ್ವಾಗತಾರ್ಹ. ಆದರೆ ಶಾಲು, ಹಣ್ಣಿನ ಬುಟ್ಟಿ ಯನ್ನು ನಿಷೇಧಿಸುವ ಆದೇಶ ಮರು ಪರಿಶೀಲಿಸಬಹುದು. ಇವು ಮರುಬಳಕೆಯಾಗುವಂತಹ ವಸ್ತುಗಳು ಹಾಗೂ ಹಣ್ಣು ಹಂಪಲು ಹಸಿವನ್ನು ನೀಗಿಸುವ ಆಹಾರ. ಆದರೆ ದಿನನಿತ್ಯ ಕಾರ್ಯಕ್ರಮಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ತಂದಂತಹ ಹೂಗುಚ್ಛ, ಹೂವಿನ ಹಾರ ಕೆಲವೇ ಗಂಟೆಗಳಲ್ಲಿ ಬಾಡಿಹೋಗಿ ಕಸದಬುಟ್ಟಿ ಸೇರುವುದು ಹಸಿದ ಹೊಟ್ಟೆಗಳಿಗೆ ನೋವಿನ ಸಂಗತಿ.