ಇದರ ನಡುವೆ ಆಂಧ್ರಪ್ರದೇಶ ಸರ್ಕಾರ ತನ್ನ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಲು ಮುಂದಾಗಿರುವುದು ಉದ್ಯೋಗಾಕಾಂಕ್ಷಿ ಯುವಪೀಳಿಗೆಯ ಕನಸನ್ನು ನುಚ್ಚುನೂರು ಮಾಡುವಂತಿದೆ. ತಜ್ಞರ ವರದಿ ಇಲ್ಲದೆ, ನೌಕರರ ಓಲೈಕೆಗಾಗಿ ಏಕಾಏಕಿ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ಯುವಪೀಳಿಗೆಗಷ್ಟೇಅಲ್ಲದೆ ಸಮಾಜಕ್ಕೂ ಮಾರಕವಾಗಲಿವೆ. ನಿವೃತ್ತಿ ವಯಸ್ಸು ಹೆಚ್ಚಳದಿಂದ ಸಂಭ್ರಮಿಸುವ ನಿವೃತ್ತಿ ಅಂಚಿನಲ್ಲಿರುವ ನೌಕರರು ಯುವಪೀಳಿಗೆಗಾಗುವ ಉದ್ಯೋಗ ಸಮಸ್ಯೆ ಅರಿತು ಸ್ವತಃ ಈ ನೂತನ ಆದೇಶವನ್ನು ತಿರಸ್ಕರಿಸುವುದು ಒಳಿತು.