‘ಮಾಧ್ಯಮಗಳ ಜತೆ ಹೆಚ್ಚು ಮಾತು ಬೇಡ’ (ಪ್ರ.ವಾ., ಜೂನ್ 30) ಎಂದು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಹೇಳಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಸಲಹೆ.
ಟಿ.ಆರ್.ಪಿ.ಗಾಗಿ ಸಣ್ಣ ಸಣ್ಣ ವಿಷಯಗಳಿಗೂ ರೆಕ್ಕೆ ಪುಕ್ಕ ಕೊಟ್ಟು ವೈಭವೀಕರಿಸುವ ಚಾಳಿ ಹಲವು ಟಿ.ವಿ. ವಾಹಿನಿಗಳಿಗೆ ಇದೆ.
ರಾಜ್ಯದ ಯಾವುದೋ ಮೂಲೆಯಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ವಾಹಿನಿಗಳು ಮತ್ತೆ ಮತ್ತೆ ಪ್ರಸಾರ ಮಾಡಿ ದೊಡ್ಡ ಘಟನೆ ಎಂಬಂತೆ ಬಿಂಬಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಿರುವ ಅನೇಕ ಪ್ರಸಂಗಗಳು ನಡೆದಿವೆ. ಪೊಲೀಸರು ಮಾಧ್ಯಮದಿಂದ ಸ್ವಲ್ಪ ದೂರ ಉಳಿದರೆ ಇವಕ್ಕೆಲ್ಲ ಕಡಿವಾಣ ಬೀಳಬಹುದು.