ಒಟ್ಟಾರೆಯಾಗಿ ಸಾಹಿತ್ಯ ಸಮ್ಮೇಳನಗಳ ಸ್ವರೂಪವೇ ಬದಲಾಗಬೇಕು. ಅಧ್ಯಕ್ಷರ ಮೆರವಣಿಗೆ, ಹಾರ ತುರಾಯಿ,
ಸನ್ಮಾನ, ಮತ್ತದೇ ಮುಖಗಳಿಂದ ಗೋಷ್ಠಿ– ಸಂವಾದಗಳು ಮತ್ತು ಔಪಚಾರಿಕ ನಿರ್ಣಯಗಳಿಗೆ ಸಮ್ಮೇಳನ ಸೀಮಿತವಾಗವಾರದು. ಇಲ್ಲಿ ತೊಡಗಿಸಲಾಗುವ ಹಣ ಸಾರ್ವಜನಿಕರದ್ದು. ಪ್ರತಿ ಪೈಸೆಗೂ ನ್ಯಾಯ ಸಲ್ಲುವಂತೆ ಅದರ ಬಳಕೆಯಾಗಬೇಕು. ಗೋಷ್ಠಿಗಳು ಸಾಹಿತ್ಯದ ವಿದ್ಯಾರ್ಥಿಗಳ ಗುತ್ತಿಗೆ ಎನ್ನುವಂತಾಗದೆ, ವೈದ್ಯ, ಎಂಜಿನಿಯರ್, ಬಸ್ ಕಂಡಕ್ಟರ್, ಸಮಾಜ ವಿಜ್ಞಾನಿ, ವಕೀಲ... ಹೀಗೆ ಕನ್ನಡಕ್ಕಾಗಿ ದುಡಿಯುತ್ತಿರುವ ಪ್ರತಿಯೊಬ್ಬರನ್ನೂ ಒಳಗೊಳ್ಳಬೇಕು. ಅನ್ಯ ಶಿಸ್ತುಗಳ ಪ್ರಾಜ್ಞರನ್ನು ಪ್ರತಿ ಬಾರಿಯೂ ದೂರವಿಟ್ಟೇ ಗೋಷ್ಠಿಗ
ಳನ್ನು ಸಂಘಟಿಸಲಾಗುತ್ತದೆ. ಪದೇ ಪದೇ ಅವೇ ಮುಖಗಳು, ಅವೇ ವಿಚಾರಗಳು... ಎನ್ನುವಂತಾಗಬಾರದು.