ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಮಳೆಗಾಲದಲ್ಲಿ ಮರಳು ಗಣಿಗಾರಿಕೆ ನಿಷಿದ್ಧ. ಈ ಹಿಂದೆ ಉಡುಪಿಯ ಶಾಸಕರು ಮರಳಿಗಾಗಿ ಅಹೋರಾತ್ರಿ ಧರಣಿ ನಡೆಸಿ ‘ಸ್ಯಾಂಡ್ ಆ್ಯಪ್’ ಮೂಲಕ ಅಲ್ಪ ಪ್ರಮಾಣದ ಮರಳನ್ನಾದರೂ ಜಿಲ್ಲೆಯ ಜನರಿಗೆ ಒದಗಿಸುವಲ್ಲಿ ಯಶಸ್ವಿಯಾದರು. ಆದರೆ ಜನ ಗೊಂದಲಕ್ಕೀಡಾದರೇ ವಿನಾ ಮರಳಿನ ಅಭಾವ ಕಡಿಮೆಯಾಗಲಿಲ್ಲ. ಅದೆಷ್ಟೋ ಮನೆ, ಕಟ್ಟಡಗಳ ಕಾಮಗಾರಿಗಳು ಅರ್ಧದಲ್ಲೇ ನಿಂತಿವೆ.