ಇತರರಿಗೆ ಪಾಠ ಎನಿಸುವಂತಹ ಕಠಿಣ ಶಿಕ್ಷೆಯನ್ನು ಇಂತಹವರಿಗೆ ನೀಡಬೇಕು. ಕೆಲವು ಯುವಕರು ಹಣ, ಅಧಿಕಾರದ ಕಾರಣದಿಂದಾಗಿ ದುರಹಂಕಾರ ಬೆಳೆಸಿಕೊಂಡಿರುತ್ತಾರೆ. ಅಂಥವರಿಗೆ ರಾಜಕೀಯ ಕೃಪಾಕಟಾಕ್ಷವೂ ಇದ್ದರಂತೂ ಎಂತಹ ದುಷ್ಕೃತ್ಯ ಎಸಗಿದರೂ ಖುಲಾಸೆಯಾಗಿ ಹೊರಬರುತ್ತೇವೆ ಎಂಬ ಭಂಡ ಧೈರ್ಯ ಬಂದುಬಿಡುತ್ತದೆ. ಹೀಗಾಗಿ ಇಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಗೂಂಡಾಪಟ್ಟಿಗೆ ಇವರ ಹೆಸರನ್ನು ಸೇರಿಸಬೇಕು.
–ಲಲಿತಾ ರೆಡ್ಡಿ, ಕಲಬುರಗಿ