ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೇನೆ ಕಟ್ಟುತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ. ಸಾಮಾನ್ಯವಾಗಿ ಮಠಗಳಲ್ಲಿ ಅಕ್ಕನ, ಅಣ್ಣನ ಬಳಗ ಇರುವುದು ಗೊತ್ತಿದೆ. ಸಂಘ, ಸೇವಾದಳಗಳೂ ಉಂಟು. ಹಿಂದಿದ್ದ ದೊರೆ, ಪಾಳೇಗಾರರು ಶತ್ರುಗಳ ವಿರುದ್ಧ ಸೇನೆ ಕಟ್ಟಿಕೊಂಡಿದ್ದರು. ಭಕ್ತರು ಕಟ್ಟಿದ ಮಠಗಳಿಗೆ ಸೇನೆಯ ಅಗತ್ಯವಿದೆಯೇ?! ಸಾಕ್ರೆಟಿಸ್, ಏಸು, ಬುದ್ಧ, ಬಸವ, ಗಾಂಧಿ ಅವರೆಲ್ಲರಿಗೂ ತಮ್ಮನ್ನು ಹೋಲಿಸಿಕೊಂಡ ಶರಣರು, ಅವರುಗಳು ವಿರೋಧಿಗಳನ್ನು ತಾತ್ವಿಕವಾಗಿ ಎದುರಿಸಿದರೇ ವಿನಾ ಸೇನೆ ಕಟ್ಟಲಿಲ್ಲವೆಂಬುದನ್ನು ಮರೆಯುತ್ತಾರೆ. ಸೇನೆ ಕಟ್ಟಿದವರ ವಿರುದ್ಧವೇ ಸೇನೆಗಳು ತಿರುಗಿಬಿದ್ದ ಇತಿಹಾಸವನ್ನೂ ನೆನೆಯುವುದಿಲ್ಲ!