ರೆಕ್ಕೆ ಮುರಿದ ಹಕ್ಕಿಗಳ ನೋವನ್ನು ಅಕ್ಷರ ರೂಪದ ಮುಖಾಂತರ ‘ಬಂಧನದ ಭಾವಲಹರಿ’ ಕೃತಿ ಪ್ರಕಟಣೆ ಮೂಲಕ ಹೊರಹಾಕಿಸಿ, ಅವರನ್ನು ಸೃಜನಶೀಲರನ್ನಾಗಿ ಮಾಡುವಲ್ಲಿ ಡಾ. ಕೆ.ರಂಗನಾಥ್ ಯಶಸ್ವಿಯಾಗಿದ್ದಾರೆ. ವ್ಯಕ್ತಿ ಸುಸಂಸ್ಕೃತನಾಗಲು ಬಯಸಿದರೆ, ಅವನ ಸುತ್ತಮುತ್ತಲಿನ ವಾತಾವರಣವೂ ಬದಲಾಗುತ್ತದೆ. ಅಪರಾಧಿಯ ಮನದಲ್ಲಿ ಮಾನವೀಯ ಮೌಲ್ಯಗಳು ಪಸರಿಸಿದರೆ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಯಾಗಲು ಸಾಧ್ಯ.