ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಹಿತಕಾರಿ ನಡೆ ಶ್ಲಾಘನೀಯ

Last Updated 18 ಸೆಪ್ಟೆಂಬರ್ 2020, 16:58 IST
ಅಕ್ಷರ ಗಾತ್ರ

ಕರ್ನಾಟಕದಾದ್ಯಂತ ತಾಲ್ಲೂಕು, ಜಿಲ್ಲಾ ನ್ಯಾಯಾಲಯಗಳು ಹಾಗೂ ಹೈಕೋರ್ಟ್‌ ಪೀಠಗಳು ಸೇರಿ ಒಟ್ಟು 1,100 ಕಡೆ ಇಂದು (ಸೆ. 19) ‘ಮೆಗಾ ಇ- ಲೋಕ್ ಅದಾಲತ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಷ್ಟು ಬೃಹತ್ ಪ್ರಮಾಣದ ‘ಜನತಾ ನ್ಯಾಯಾಲಯ’ ಪ್ರಕ್ರಿಯೆ, ಅದೂ ಏಕಕಾಲದಲ್ಲಿ ನಡೆಯುತ್ತಿರುವುದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು. ಸಮಾಜದ ಸ್ವಾಸ್ಥ್ಯ, ನೆಮ್ಮದಿಗಾಗಿ ಅಗತ್ಯವಿರುವ ಶೀಘ್ರ ಮತ್ತು ವ್ಯಾಪಕ ನ್ಯಾಯದಾನವು ಜಾಗತಿಕ ಸ್ವಾಸ್ಥ್ಯ ಹಾನಿಯ ಈ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಹೆಚ್ಚುಉಪಯುಕ್ತ.

‘ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ’ ಎಂಬ ಡಿ.ವಿ.ಜಿ.ಯವರ ನುಡಿಯಂತೆ, ಕರ್ನಾಟಕ ನ್ಯಾಯಾಂಗದ ಈ ಸಮಾಜಹಿತಕಾರಿ ನಡೆಯು ಜನಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಾತ್ರವಲ್ಲ, ನ್ಯಾಯಾಂಗದ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ.

ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT