ಇಷ್ಟು ಬೃಹತ್ ಪ್ರಮಾಣದ ‘ಜನತಾ ನ್ಯಾಯಾಲಯ’ ಪ್ರಕ್ರಿಯೆ, ಅದೂ ಏಕಕಾಲದಲ್ಲಿ ನಡೆಯುತ್ತಿರುವುದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು. ಸಮಾಜದ ಸ್ವಾಸ್ಥ್ಯ, ನೆಮ್ಮದಿಗಾಗಿ ಅಗತ್ಯವಿರುವ ಶೀಘ್ರ ಮತ್ತು ವ್ಯಾಪಕ ನ್ಯಾಯದಾನವು ಜಾಗತಿಕ ಸ್ವಾಸ್ಥ್ಯ ಹಾನಿಯ ಈ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಹೆಚ್ಚುಉಪಯುಕ್ತ.