ರಾಜ್ಯದಲ್ಲಿ ಸ್ಥಿರವಾದ ಆಡಳಿತ ಇದ್ದಲ್ಲಿ ಮಾತ್ರ, ನಾಡಿನ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ರಾಜ್ಯ, ಬರದಂತಹ ಗಂಭೀರ ಸ್ಥಿತಿ ಎದುರಿಸುತ್ತಿದೆ. ಇಂತಹ ವೇಳೆ, ಸರ್ಕಾರವನ್ನು ಅಸ್ಥಿರಗೊಳಿಸುವಪ್ರಯತ್ನ ಸಲ್ಲದು.
ಯಾವುದೇ ಸರ್ಕಾರ ಐದು ವರ್ಷಆಡಳಿತ ನಡೆಸಿದಲ್ಲಿ ಆಡಳಿತದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು,ಕ್ರಿಯಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲುಸಾಧ್ಯ. ಇಲ್ಲವಾದಲ್ಲಿ, ಉಂಟಾಗಬಹುದಾದ ಅರಾಜಕತೆಗೆ ಎಲ್ಲ ಚುನಾಯಿತ ಜನಪ್ರತಿನಿಧಿಗಳೂ ಕಾರಣರಾಗುತ್ತಾರೆ.