ಯಾವುದೇ ಒಬ್ಬ ಮಹಾನ್ ಪುರುಷನ ವ್ಯಕ್ತಿತ್ವ, ಸಾಧನೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದ ವ್ಯಕ್ತಿಯು ಆ ಮಹಾನ್ ಪುರುಷನ ಅಭಿಮಾನಿ ಅಥವಾ ವಿಮರ್ಶಕ ಆಗಲು ಅರ್ಹನಲ್ಲ. ದೇಶಕ್ಕಾಗಿ ಹೋರಾಡಿದವರ ವಿಷಯವನ್ನಿಟ್ಟುಕೊಂಡು ಎರಡು ಭಾಷಿಕ ಸಮುದಾಯಗಳ ಮಧ್ಯೆ ಗೊಂದಲ ಸೃಷ್ಟಿ ಮಾಡುವುದು ಆ ಮಹಾನ್ ವ್ಯಕ್ತಿಗಳಿಗೆ ಮಾಡುವ ಮಹಾ ಅಪಮಾನ. ಈ ವಿಚಾರವಾಗಿ ರಾಜ್ಯದ ನಾಯಕರು ಜಾಣಮೌನ ಮೆರೆಯುತ್ತಿರುವುದು ಅವರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕನ್ನಡಿ ಹಿಡಿದಂತಿದೆ. ಈ ಬಗೆಯ ನಡೆಯು ಭವಿಷ್ಯದಲ್ಲಿ ಅಶಾಂತಿ ಹಾಗೂ ದುರ್ಘಟನೆಗಳು ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ನಾಡಿನ ಎಲ್ಲ ನಾಯಕರು ರಾಜಕಾರಣ, ಪಕ್ಷ, ಜಾತಿಯನ್ನು ಬದಿಗಿಟ್ಟು ಒಮ್ಮತದಿಂದ ಕನ್ನಡತನವನ್ನು ಪ್ರದರ್ಶಿಸಬೇಕು. ಸುಖಾ ಸುಮ್ಮನೆ ಅಶಾಂತಿ ಸೃಷ್ಟಿಸುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕು.