ಮೈಸೂರಿನ ಕೆಲವು ಕೇಂದ್ರಗಳಲ್ಲಿ ಸೋಮವಾರ ನಡೆದ ಕೆಪಿಎಸ್ಸಿ ಗೆಜೆಟೆಡ್ ಗ್ರೂಪ್ ಎ ಮತ್ತು ಬಿ ಪರೀಕ್ಷೆಯ ಸಂದರ್ಭದಲ್ಲಿ ಸೂಕ್ತ ಭದ್ರತೆ ಇಲ್ಲದಿದ್ದುದು ಎದ್ದುಕಂಡಿತು. ಕೇಂದ್ರದ ಸುತ್ತಮುತ್ತ 200 ಮೀಟರ್ವರೆಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನ ನಿಷೇಧಾಜ್ಞೆಗೆ ಸ್ಪಂದಿಸಲಿಲ್ಲ. ಪರೀಕ್ಷಾ ಕೇಂದ್ರವೊಂದರ ಪಕ್ಕದಲ್ಲೇ ದೊಡ್ಡದಾದ ಧ್ವನಿಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರಿಂದ, ಪರೀಕ್ಷಾರ್ಥಿಗಳಿಗೆ ಕಿರಿಕಿರಿ ಉಂಟಾಯಿತು. ಕೆಪಿಎಸ್ಸಿ ಮತ್ತು ಪೊಲೀಸ್ ಇಲಾಖೆಯು ಮುಂದೆ ಯಾವುದೇ ಪರೀಕ್ಷೆಯ ಸಂದರ್ಭದಲ್ಲಿ ಇಂತಹ ಅವ್ಯವಸ್ಥೆ ಮರುಕಳಿಸದಂತೆ ನೋಡಿಕೊಳ್ಳಬೇಕು.