ಇಂತಹ ದಿನ ಮಕ್ಕಳನ್ನು ಕರೆದೊಯ್ಯಬೇಕೆಂದು ಶಾಲಾ ಆಡಳಿತ ಮಂಡಳಿಯು ಮೊದಲೇ ಕೋರಿದ್ದರೂ ಸಕಾಲದಲ್ಲಿ ಅನುಮತಿ ದೊರೆಯುವುದೇ? ನೂರಾರು ಕೊಕ್ಕೆಗಳು, ನೂರು ಪ್ರಶ್ನೆಗಳು, ಸ್ಪರ್ಧಾತ್ಮಕ ದರ ಪಟ್ಟಿಯ ತುಲನೆ... ಹೀಗೆ ವಿವಿಧ ಸಬೂಬುಗಳ ನಡುವೆ ಪತ್ರ ವ್ಯವಹಾರ ಮತ್ತು ಅಲೆಯುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ. ಸಕಾರಣಕ್ಕೆ ಹೊರಗೆ ಹೋಗಬೇಕಾದ ವಿದ್ಯಾರ್ಥಿಗಳಿಗೆ ಸಮೂಹ ಸಾರಿಗೆ ವ್ಯವಸ್ಥೆ ಕಲ್ಪಿಸುವತ್ತ ಇಲಾಖೆ ಇನ್ನಾದರೂ ಚಿಂತಿಸಬೇಕು.⇒ವಿಜಯ್ ಹೆಮ್ಮಿಗೆ, ಮೈಸೂರು