‘ಮಕ್ಕಳು ಕೆರೆಯಲ್ಲಿ ಈಜಿದರೆ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಕಂದಾಯ ಸಚಿವರು ಹೇಳಿದ್ದಾರೆ. ಇದೊಂದು ಬಾಲಿಶ ಹೇಳಿಕೆ. ಯಾವ ಪೋಷಕರು ತಾನೇ ತಮ್ಮ ಮಕ್ಕಳು ಈಜಲು ಹೋಗಿ ಸಾಯಲಿ ಎಂದು ಬಯಸುತ್ತಾರೆ? ಎಷ್ಟೋ ಬಾರಿ ಪೋಷಕರ ಗಮನಕ್ಕೇ ಬಾರದಂತೆ ಮಕ್ಕಳು ಈಜಲು ಹೋಗುತ್ತಾರೆ. ಆಗ ಪೋಷಕರು ಹೇಗೆ ಹೊಣೆಗಾರರಾಗುತ್ತಾರೆ? ಬದಲಿಗೆ, ಹೆಚ್ಚು ಅಪಾಯ, ಆಳವಿರುವ ಕೆರೆಗಳ ಬಳಿ ಕಣ್ಗಾವಲು ಸಿಬ್ಬಂದಿಯನ್ನು ನೇಮಿಸಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಮಾತ್ರ ಇಂತಹ ಸಾವುಗಳನ್ನು ತಡೆಯಲು ಸಾಧ್ಯ.
ಇಂದಿರಾ ಶ್ರೀಧರ್,ಮಳಲಕೆರೆ, ದಾವಣಗೆರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.