‘ನನಗೆ ಬಿಜೆಪಿಯ ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದೆ. ನನಗೆ ಕೇಸರಿ ಬಣ್ಣ ಬಳಿಯಲಾಗದು’ ಎಂದು ನಟ ರಜನಿಕಾಂತ್ ಹೇಳಿದ್ದಾರೆ. ರಜನಿಕಾಂತ್ ಕಳೆದ ಲೋಕಸಭಾ ಚುನಾವಣೆ ವೇಳೆ, ‘ಒಬ್ಬ ವ್ಯಕ್ತಿಯ ಮೇಲೆ ಹತ್ತು ಜನ ದಾಳಿ ನಡೆಸಿದರೆ ಬಲಿಷ್ಠ ಯಾರು’ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದರು. ಇದು, ನರೇಂದ್ರ ಮೋದಿ ಅವರ ಬಗೆಗಿನ ಒಲವಾಗಿದ್ದು, ರಜನಿ ಬಿಜೆಪಿಗೆ ಸೇರುವ ನಿಲುವೂ ಆಗಿರಬಹುದೆಂದು ಅನೇಕರು ಊಹಿಸಿದ್ದರು. ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಜನಿ ಪಾಲ್ಗೊಂಡಿದ್ದರು. ಅವರ ಈ ರೀತಿಯ ಗೊಂದಲದ ಹೇಳಿಕೆಗಳು ಸ್ಪಷ್ಟ ರಾಜಕೀಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರನ್ನು ವಿಫಲವಾಗಿಸಿವೆ!