ಕಾಂಕ್ರೀಟ್ ಕಾಡು ಬೆಳೆಸಿ ಇಂದು ನಾವು ಪಡುತ್ತಿರುವ ಪಾಡು ಮುಂದಿನ ಪೀಳಿಗೆಗೆ ಹೊರೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿರುವ ಈ ಸಂದರ್ಭದಲ್ಲಿ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಎಲ್ಲ ಪಾಲಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳನ್ನು ಉನ್ನತ ಶಿಕ್ಷಣ ಪಡೆಯುವಷ್ಟಕ್ಕೇ ಸೀಮಿತಗೊಳಿಸದೆ, ಪರಿಸರದ ಬಗ್ಗೆ, ನೆಲ-ಜಲದ ವಸ್ತುಸ್ಥಿತಿಯ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಾದ ಅನಿವಾರ್ಯ ಇದೆ.