‘ನಾನು ಯಾವಾಗಲೂ ಪವರ್ಫುಲ್... ಮುಖ್ಯಮಂತ್ರಿಯಾಗುವ ಆಸೆ ಇದೆ... ದುರ್ಗಾದೇವಿಯ ಆಶೀರ್ವಾದ ನನ್ನ ಮೇಲಿದೆ...’ ಮುಂತಾಗಿ ಅವರು ಹೇಳಿರುವುದು ಲಿಂಗಾಯತ ಧರ್ಮ ತತ್ತ್ವಕ್ಕೆ ವಿರುದ್ಧವಾಗಿದೆ. ‘ಆಸೆಯೆಂ
ಬುದು ಅರಸಂಗಲ್ಲದೆ ಶರಣರಿಗೆ ಸಲ್ಲದಯ್ಯ’ ಎನ್ನುವ ಮತ್ತು ‘ತನ್ನ ಬಣ್ಣಿಸಬೇಡ...’ ಎನ್ನುವ ಶರಣರ ಮಾತುಗಳಿಗೆ ಇವರು ಏನು ಬೆಲೆ ಕೊಟ್ಟಂತಾಯಿತು? ಇಷ್ಟಲಿಂಗವನ್ನು ಬಿಟ್ಟು, ಅನ್ಯ ದೈವದ ಆಶೀರ್ವಾದ ತನಗಿದೆ ಎಂದು ಹೇಳುವುದು ಎಷ್ಟು ಸರಿ? ಅಧಿಕಾರ, ಸ್ಥಾನಮಾನ ತಾನಾಗಿ ಒಲಿದು ಬರಬೇಕು (ಕುಮಾರಸ್ವಾಮಿ ಅವರಿಗೆ ಬಂದಂತೆ). ಅದಕ್ಕಾಗಿ ಪರಿತಪಿಸುವುದು ಶರಣ ತತ್ತ್ವಗಳಿಗೆ ವಿರುದ್ಧವಾದುದು. ಹೋರಾಟದ ಹೆಸರಲ್ಲಿ ಹೇಳುವುದು ಒಂದು; ಮಾಡುವುದು ಮತ್ತೊಂದು. ಇದು ಸರಿಯೇ?