ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷಾಟನೆ ಕರ ಸಂಗ್ರಹ ನಿಲ್ಲಲಿ

Last Updated 29 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ಒಂದೆಡೆ ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬೇಡಿ. ಭಿಕ್ಷಾಟನೆ ಒಂದು ಪಿಡುಗು. ಅದನ್ನು ತೊಲಗಿಸಿ ಎಂದು ರೆಡಿಯೋ ಮೂಲಕ ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ನಗರಸಭೆ ಮೂಲಕ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಿಕೊಳ್ಳುವಾಗ ಭಿಕ್ಷಾಟನೆ ಕರವನ್ನು ಸಂಗ್ರಹಿಸುತ್ತದೆ. ಇದು ಸರ್ಕಾರದ ದ್ವಂದ್ವ ನೀತಿಯಾಗಿದೆ. ಇದು ನಿಲ್ಲಬೇಕು. ಸಂಗ್ರಹಿಸಿದ ಭಿಕ್ಷಾಟನೆ ಕರದಿಂದ ಭಿಕ್ಷುಕರಿಗೆ ಪುನರ್ವಸತಿ ನೀಡಿದ ಉದಾಹರಣೆಗಳಂತೂ ಕಂಡು ಬಂದಿಲ್ಲ. ಆದಾಗ್ಯೂ ಭಿಕ್ಷಾಟನೆ ಕರವನ್ನು ಸಂಗ್ರಹಿಸಲಾಗುತ್ತದೆ. ಭಿಕ್ಷಾಟನೆ ಕರ ಸಂಗ್ರಹ ನಿಲ್ಲಲಿ.

–ಡಾ.ಟಿ.ಪಿ. ಗಿರಡ್ಡಿ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT