‘ಕೊಳ್ಳುಬಾಕತನ ಮತ್ತು ಮೌಢ್ಯಗಳಿಂದ ನಾವು ವಿನಾಶದೆಡೆಗೆ ಹೋಗುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ. ನಿಜ, ‘ನಾನು ಮತ್ತು ನನ್ನವರಿಗೆ ಏನು ಬೇಕೋ ಅಷ್ಟನ್ನು ಮಾತ್ರ ಯೋಚಿಸಬೇಕು, ಬೇರೆಯವರ ಅಥವಾ ಒಟ್ಟಾರೆ ಸಮಾಜದ ಏಳಿಗೆಯ ಬಗ್ಗೆ ಯೋಚನೆ ಮಾಡುವ ಅಗತ್ಯವೇ ಇಲ್ಲ’ ಎಂಬಂಥ ಭಾವವನ್ನು ಇಂದಿನ ಪೀಳಿಗೆಯಲ್ಲಿ ನಾವು ಮೂಡಿಸುತ್ತಿದ್ದೇವೆ.