ರಾಜ್ಯದ ಎರಡು ಕ್ಷೇತ್ರಗಳಿಗೆ ಈಗ ಉಪಚುನಾವಣೆ ನಡೆಯುತ್ತಿದೆ. ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಇದೊಂದು ಸುವರ್ಣಾವಕಾಶ. ಆಡಳಿತ ವಹಿಸಿಕೊಂಡ ದಿನದಿಂದ ಕ್ಷೇತ್ರದಲ್ಲಿ ಆಡಳಿತ ಪಕ್ಷ ಇದುವರೆಗೂ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂಬುದನ್ನು ಮತದಾರರ ಗಮನಕ್ಕೆ ತಂದು, ಹೆಮ್ಮೆಯಿಂದ ಇನ್ನೂ ಏನು ಮಾಡುವುದಿದೆ ಎಂದು ಹೇಳಿ ಚುನಾವಣೆ ಗೆಲ್ಲಲು ಇದೊಂದು ವೇದಿಕೆ. ಹಾಗೆಯೇ ವಿರೋಧ ಪಕ್ಷಗಳಿಗಂತೂ ದೇವರು ಕೊಟ್ಟ ವರ. ಆಡಳಿತ ಪಕ್ಷದ ಲೋಪದೋಷಗಳನ್ನು ಹೇಳಿ ಅದರ ಅಸಾಮರ್ಥ್ಯವನ್ನು ಎಳೆ ಎಳೆಯಾಗಿ ಜನರ ಮುಂದಿಟ್ಟು ‘ಇನ್ನೂ ಅವರ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸುತ್ತೀರಾ?’ ಎಂದು ಪ್ರಶ್ನಿಸಿ, ಮತದಾರರ ಮನಗೆದ್ದು ಚುನಾವಣೆ ಗೆಲ್ಲಲು ಒಂದು ಸುಸಂದರ್ಭ.