<p>ರಾಜ್ಯದ ಎರಡು ಕ್ಷೇತ್ರಗಳಿಗೆ ಈಗ ಉಪಚುನಾವಣೆ ನಡೆಯುತ್ತಿದೆ. ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಇದೊಂದು ಸುವರ್ಣಾವಕಾಶ. ಆಡಳಿತ ವಹಿಸಿಕೊಂಡ ದಿನದಿಂದ ಕ್ಷೇತ್ರದಲ್ಲಿ ಆಡಳಿತ ಪಕ್ಷ ಇದುವರೆಗೂ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂಬುದನ್ನು ಮತದಾರರ ಗಮನಕ್ಕೆ ತಂದು, ಹೆಮ್ಮೆಯಿಂದ ಇನ್ನೂ ಏನು ಮಾಡುವುದಿದೆ ಎಂದು ಹೇಳಿ ಚುನಾವಣೆ ಗೆಲ್ಲಲು ಇದೊಂದು ವೇದಿಕೆ. ಹಾಗೆಯೇ ವಿರೋಧ ಪಕ್ಷಗಳಿಗಂತೂ ದೇವರು ಕೊಟ್ಟ ವರ. ಆಡಳಿತ ಪಕ್ಷದ ಲೋಪದೋಷಗಳನ್ನು ಹೇಳಿ ಅದರ ಅಸಾಮರ್ಥ್ಯವನ್ನು ಎಳೆ ಎಳೆಯಾಗಿ ಜನರ ಮುಂದಿಟ್ಟು ‘ಇನ್ನೂ ಅವರ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸುತ್ತೀರಾ?’ ಎಂದು ಪ್ರಶ್ನಿಸಿ, ಮತದಾರರ ಮನಗೆದ್ದು ಚುನಾವಣೆ ಗೆಲ್ಲಲು ಒಂದು ಸುಸಂದರ್ಭ.</p>.<p>ಇದು ಮತದಾರರಲ್ಲಿ ಸರ್ಕಾರದ ಆಡಳಿತ ವೈಫಲ್ಯ ಅಥವಾ ಸಾಫಲ್ಯವನ್ನು ಉದಾಹರಣೆ ಸಹಿತ ಬಯಲು ಮಾಡುವ ಸಂದರ್ಭ. ಆದರೆ ಇದರ ಅರಿವು ಇಲ್ಲದೆ ರಾಜಕಾರಣಿಗಳು ಒಬ್ಬರನ್ನೊಬ್ಬರು ಹೀನಾಮಾನವಾಗಿ ತೆಗಳುತ್ತಾ ಪರಸ್ಪರ ಕೆಸರೆರಚಾಡಿಕೊಂಡು ಕುಣಿದಾಡುತ್ತಿರುವುದನ್ನು ಕಂಡು ಜನ ಅಸಹ್ಯಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದ ನಾಯಕರ ಹೆಸರುಗಳನ್ನೂ ಎಳೆದುತಂದು ಅವರ ಮರ್ಯಾದೆಯನ್ನು ಹರಾಜು ಹಾಕಲು ಹೊರಟಿರುವುದು ನಾಚಿಕೆಗೇಡು.</p>.<p><strong>ಸತ್ಯಬೋಧ, ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದ ಎರಡು ಕ್ಷೇತ್ರಗಳಿಗೆ ಈಗ ಉಪಚುನಾವಣೆ ನಡೆಯುತ್ತಿದೆ. ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಇದೊಂದು ಸುವರ್ಣಾವಕಾಶ. ಆಡಳಿತ ವಹಿಸಿಕೊಂಡ ದಿನದಿಂದ ಕ್ಷೇತ್ರದಲ್ಲಿ ಆಡಳಿತ ಪಕ್ಷ ಇದುವರೆಗೂ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂಬುದನ್ನು ಮತದಾರರ ಗಮನಕ್ಕೆ ತಂದು, ಹೆಮ್ಮೆಯಿಂದ ಇನ್ನೂ ಏನು ಮಾಡುವುದಿದೆ ಎಂದು ಹೇಳಿ ಚುನಾವಣೆ ಗೆಲ್ಲಲು ಇದೊಂದು ವೇದಿಕೆ. ಹಾಗೆಯೇ ವಿರೋಧ ಪಕ್ಷಗಳಿಗಂತೂ ದೇವರು ಕೊಟ್ಟ ವರ. ಆಡಳಿತ ಪಕ್ಷದ ಲೋಪದೋಷಗಳನ್ನು ಹೇಳಿ ಅದರ ಅಸಾಮರ್ಥ್ಯವನ್ನು ಎಳೆ ಎಳೆಯಾಗಿ ಜನರ ಮುಂದಿಟ್ಟು ‘ಇನ್ನೂ ಅವರ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸುತ್ತೀರಾ?’ ಎಂದು ಪ್ರಶ್ನಿಸಿ, ಮತದಾರರ ಮನಗೆದ್ದು ಚುನಾವಣೆ ಗೆಲ್ಲಲು ಒಂದು ಸುಸಂದರ್ಭ.</p>.<p>ಇದು ಮತದಾರರಲ್ಲಿ ಸರ್ಕಾರದ ಆಡಳಿತ ವೈಫಲ್ಯ ಅಥವಾ ಸಾಫಲ್ಯವನ್ನು ಉದಾಹರಣೆ ಸಹಿತ ಬಯಲು ಮಾಡುವ ಸಂದರ್ಭ. ಆದರೆ ಇದರ ಅರಿವು ಇಲ್ಲದೆ ರಾಜಕಾರಣಿಗಳು ಒಬ್ಬರನ್ನೊಬ್ಬರು ಹೀನಾಮಾನವಾಗಿ ತೆಗಳುತ್ತಾ ಪರಸ್ಪರ ಕೆಸರೆರಚಾಡಿಕೊಂಡು ಕುಣಿದಾಡುತ್ತಿರುವುದನ್ನು ಕಂಡು ಜನ ಅಸಹ್ಯಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದ ನಾಯಕರ ಹೆಸರುಗಳನ್ನೂ ಎಳೆದುತಂದು ಅವರ ಮರ್ಯಾದೆಯನ್ನು ಹರಾಜು ಹಾಕಲು ಹೊರಟಿರುವುದು ನಾಚಿಕೆಗೇಡು.</p>.<p><strong>ಸತ್ಯಬೋಧ, ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>