ಈ ದಿನಗಳಲ್ಲಿ ಬಿಸಿಲಿನ ಬೇಗೆಯನ್ನು ನೀಗಿಸಿಕೊಳ್ಳಲು ಅನೇಕ ಹಣ್ಣುಗಳನ್ನು ಉಪಯೋಗಿಸುತ್ತಿದ್ದೇವೆ. ಬರೀ ಹಣ್ಣು ತಿನ್ನುವುದಲ್ಲದೆ ಇನ್ನೊಂದು ಉಪಯುಕ್ತ ಕೆಲಸವನ್ನೂ ಮಾಡಬಹುದು. ಹಣ್ಣಿನ ತಿರುಳನ್ನು ತಿಂದು ಅದರ ಬೀಜವನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂದೆಡೆ ಒಣಗಿಸಿ ಸಂಗ್ರಹಿಸಬೇಕು. ಮಳೆಗಾಲ ಆರಂಭವಾಗಿ ಒಂದೆರಡು ಮಳೆ ಬಿದ್ದ ನಂತರ ಈ ಬೀಜಗಳನ್ನು ಮಣ್ಣು ಮತ್ತು ಗೊಬ್ಬರ ಬೆರೆಸಿ ಬೀಜದುಂಡೆಗಳನ್ನಾಗಿ ಮಾಡಬೇಕು. ನಂತರ ಪೊದೆಗಳು, ಬಳ್ಳಿಗಳು, ಮುಳ್ಳಿನ ಕಂಟಿಗಳು ಇರುವ ಕಡೆ ಬೀಜದುಂಡೆಗಳನ್ನು
ಹಾಕಬೇಕು.