ನಮ್ಮ ಪೂರ್ವಜರು ಜಲಮೂಲಗಳಾದ ಕೆರೆ, ನದಿಗಳನ್ನು ಗಂಗಾಮಾತೆ ಎಂಬ ಪೂಜ್ಯ ಭಾವನೆಯಿಂದ ನೋಡುತ್ತಿದ್ದರು. ಅವು ತುಂಬಿದಾಗ ಬಾಗಿನ ಕೊಡುವುದು, ಹಬ್ಬ ಹರಿದಿನಗಳಲ್ಲಿ ಪೂಜಿಸುವ ಮೂಲಕ ಆ ಸಂಪ್ರದಾಯವನ್ನು ನಾವು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದೇವೆ. ಎಡೆಯ ಹೆಸರಿನಲ್ಲಿ ಮಾಡಿಟ್ಟ ಸಿಹಿ ತಿನಿಸುಗಳನ್ನು ನಾವು ಸಂಪ್ರದಾಯದಂತೆ ನೀರಿಗೆ ಹಾಕುವುದೇನೋ ಸರಿ. ಇವನ್ನು ಜಲಚರಗಳು ತಿನ್ನುತ್ತವೆ.