ರಾಜ್ಯ ಮುಜರಾಯಿ ಇಲಾಖೆಯುಅನುದಾನವನ್ನು ಮರುಹಂಚಿಕೆ ಮಾಡಿ, ಆಡಳಿತಾರೂಢ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಕೊಡಮಾಡಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 19). ದೇವರಿಗೆ ಹಣ ಹಂಚಿಕೆಯಲ್ಲೂ ‘ರಾಜಕೀಯ’! ಇಲ್ಲಿ ಅನುದಾನ ಪಡೆಯದ ದೇವಳದ ದೇವರೇ ಸತ್ಯವಂತ. ಏಕೆಂದರೆ ಆ ದೇವರುಗಳಿಗೆ ‘ರಾಜಕೀಯ’ದ ಹಂಗಿಲ್ಲ ತಾನೆ? ಓ ದೇವ ಕ್ಷಮಿಸು. ಮೊರೆ ಇಟ್ಟಾಗ ಆಶೀರ್ವದಿಸುವ ನಿನಗೇ ಇಂತಹ ಅವಸ್ಥೆ! ನೀನಾರಲ್ಲಿ ಮೊರೆ ಇಡುವೆಯೋ?