ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆ ನಡೆಸುವುದು ಜನರ ಸಾಂವಿಧಾನಿಕ ಹಕ್ಕು. ಆದರೆ, ಜನರ ಜೀವಕ್ಕೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ನಡೆಸಬೇಕು. ಒಂದು ಗುಂಪು ಪೌರತ್ವ ಕಾಯ್ದೆಯ ಪರ ಮಾತನಾಡುತ್ತಿದೆ. ಇನ್ನೊಂದು ಗುಂಪು ಇದರ ವಿರುದ್ಧ ಬೀದಿಗಿಳಿದಿದೆ. ಇವರ ನಡುವೆ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ.