ಇದು ಅನಿವಾರ್ಯವಾದ ಕ್ರಮ. ಆದರೆ ಪ್ರಸ್ತುತ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು... ಇಂಥವರೆಲ್ಲ ಹಗಲು-ರಾತ್ರಿ ಎನ್ನದೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೊರೊನಾ ವೈರಸ್ ವಿರುದ್ಧ ನಾಗರಿಕರ ರಕ್ಷಣೆಗಾಗಿ ಪಣತೊಟ್ಟು ಶ್ರಮಿಸುತ್ತಿದ್ದಾರೆ. ಅಂತಹವರ ವೇತನವನ್ನು ಕಡಿತ ಮಾಡಬಾರದು. ಅವರ ಋಣವನ್ನು ಈ ರೀತಿ ಮಾತ್ರ ತೀರಿಸಲು ಸಾಧ್ಯ.