<p class="Briefhead"><strong>ರಾಹುಲ್ ರೌದ್ರಾವತಾರಕ್ಕೆ ನಾಗರಿಕರು ಋಣಿ!</strong></p>.<p>ಜಾಹೀರಾತು ಎಂದರೆ ಏನು ಬೇಕಾದರೂ ತೋರಿಸಬಹುದೇ? ಜಾಹೀರಾತಿನಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳಿಗಾದರೂ ಸಾಮಾನ್ಯ ಜ್ಞಾನ, ಸಾಮಾಜಿಕ ಹೊಣೆಗಾರಿಕೆ ಎಂಬುದು ಇರುವುದಿಲ್ಲವೇ? ‘ನಾನು ಗೂಂಡಾ’ ಎಂದು ರಾಹುಲ್ ದ್ರಾವಿಡ್ ಅವರು ಅಬ್ಬರಿಸುವ ಒಂದು ಜಾಹೀರಾತಿನ ಸುದ್ದಿ ವೈರಲ್ ಆಗಿದೆಯಂತೆ (ಪ್ರ.ವಾ., ಏ. 11).</p>.<p>ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡ ಈ ಸೆಲೆಬ್ರಿಟಿ ರೌದ್ರಾವತಾರ ತಾಳಿ, ಅಬ್ಬರಿಸಿ, ತಮ್ಮ ಕೈಯಲ್ಲಿನ ಬ್ಯಾಟ್ ಬೀಸಿ ಕಾರೊಂದರ ಗಾಜನ್ನು ಕುಟ್ಟಿ ಪುಡಿ ಮಾಡುವ ದೃಶ್ಯ ಇದು. ಅಭಿನಯ ಚೆನ್ನಾಗಿದೆಯಂತೆ. ಇದರ ಪರಿಕಲ್ಪನೆ ಮಾಡಿದವರಿಗೂ ನಿರ್ದೇಶಕರಿಗೂ ವಿಶೇಷವಾಗಿ ‘ಪ್ರಚಂಡ’ವಾಗಿ ನಟಿಸಿರುವ ದ್ರಾವಿಡ್ ಅವರಿಗೂ ಜಗತ್ತಿನ ನಾಗರಿಕರು ಋಣಿಯಾಗಿರಬೇಕಲ್ಲವೇ?!</p>.<p>ಅವರು ಜಾಹೀರು ಮಾಡಿರುವ ಸಂದೇಶದ ಪ್ರಕಾರ- ಇನ್ನು ಎಲ್ಲಿಯೇ ಆದರೂ ಟ್ರಾಫಿಕ್ ಜಾಮ್ ಆದರೆ ತಕ್ಷಣವೇ ನಿಮ್ಮ ಬ್ಯಾಟ್ ಅಥವಾ ದೊಣ್ಣೆ ಬೀಸಿ ಪಕ್ಕದ ಯಾರದೋ ಕಾರನ್ನು ಚಚ್ಚಿ ‘ನಾನು ಗೂಂಡಾ’ ಎಂದು ಕೈ ಎತ್ತಿ ಅಬ್ಬರಿಸಿರಿ; ಯಾರಾದರೂ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಲೈಕ್ ಗಿಟ್ಟಿಸಲಿ!</p>.<p><strong>- ಡಾ. ಟಿ.ಗೋವಿಂದರಾಜು, <span class="Designate">ಬೆಂಗಳೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead"><strong>ರಾಹುಲ್ ರೌದ್ರಾವತಾರಕ್ಕೆ ನಾಗರಿಕರು ಋಣಿ!</strong></p>.<p>ಜಾಹೀರಾತು ಎಂದರೆ ಏನು ಬೇಕಾದರೂ ತೋರಿಸಬಹುದೇ? ಜಾಹೀರಾತಿನಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳಿಗಾದರೂ ಸಾಮಾನ್ಯ ಜ್ಞಾನ, ಸಾಮಾಜಿಕ ಹೊಣೆಗಾರಿಕೆ ಎಂಬುದು ಇರುವುದಿಲ್ಲವೇ? ‘ನಾನು ಗೂಂಡಾ’ ಎಂದು ರಾಹುಲ್ ದ್ರಾವಿಡ್ ಅವರು ಅಬ್ಬರಿಸುವ ಒಂದು ಜಾಹೀರಾತಿನ ಸುದ್ದಿ ವೈರಲ್ ಆಗಿದೆಯಂತೆ (ಪ್ರ.ವಾ., ಏ. 11).</p>.<p>ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡ ಈ ಸೆಲೆಬ್ರಿಟಿ ರೌದ್ರಾವತಾರ ತಾಳಿ, ಅಬ್ಬರಿಸಿ, ತಮ್ಮ ಕೈಯಲ್ಲಿನ ಬ್ಯಾಟ್ ಬೀಸಿ ಕಾರೊಂದರ ಗಾಜನ್ನು ಕುಟ್ಟಿ ಪುಡಿ ಮಾಡುವ ದೃಶ್ಯ ಇದು. ಅಭಿನಯ ಚೆನ್ನಾಗಿದೆಯಂತೆ. ಇದರ ಪರಿಕಲ್ಪನೆ ಮಾಡಿದವರಿಗೂ ನಿರ್ದೇಶಕರಿಗೂ ವಿಶೇಷವಾಗಿ ‘ಪ್ರಚಂಡ’ವಾಗಿ ನಟಿಸಿರುವ ದ್ರಾವಿಡ್ ಅವರಿಗೂ ಜಗತ್ತಿನ ನಾಗರಿಕರು ಋಣಿಯಾಗಿರಬೇಕಲ್ಲವೇ?!</p>.<p>ಅವರು ಜಾಹೀರು ಮಾಡಿರುವ ಸಂದೇಶದ ಪ್ರಕಾರ- ಇನ್ನು ಎಲ್ಲಿಯೇ ಆದರೂ ಟ್ರಾಫಿಕ್ ಜಾಮ್ ಆದರೆ ತಕ್ಷಣವೇ ನಿಮ್ಮ ಬ್ಯಾಟ್ ಅಥವಾ ದೊಣ್ಣೆ ಬೀಸಿ ಪಕ್ಕದ ಯಾರದೋ ಕಾರನ್ನು ಚಚ್ಚಿ ‘ನಾನು ಗೂಂಡಾ’ ಎಂದು ಕೈ ಎತ್ತಿ ಅಬ್ಬರಿಸಿರಿ; ಯಾರಾದರೂ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಲೈಕ್ ಗಿಟ್ಟಿಸಲಿ!</p>.<p><strong>- ಡಾ. ಟಿ.ಗೋವಿಂದರಾಜು, <span class="Designate">ಬೆಂಗಳೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>