ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿಯೂ ಗೊಂದಲಮಯ ನಿರ್ಧಾರ

ಅಕ್ಷರ ಗಾತ್ರ

ಈ ಬಾರಿಯೂ ಗೊಂದಲಮಯ ನಿರ್ಧಾರ

ಒಂದು ವರ್ಷದ ಕೊರೊನಾ ಪರಿಣಾಮದ ಅನುಭವದ ನಡುವೆಯೂ ಚುನಾವಣಾ ಪ್ರಚಾರಕ್ಕೆ ಮುಕ್ತವಾಗಿ ಅವಕಾಶ ಕೊಟ್ಟು, ಇನ್ನಿತರ ಚಟುವಟಿಕೆಗಳಿಗೆ ನಿರ್ಬಂಧ ಹೇರಿ, ಜನರ ಓಡಾಟ ವಿರಳವಾಗಿರುವ ಸಮಯದಲ್ಲಿ ಅನಗತ್ಯವಾಗಿ ರಾತ್ರಿ ಕರ್ಫ್ಯೂ ಹೇರಿದರೆ ಏನು ಪ್ರಯೋಜನ? ಕಳೆದ ಬಾರಿಯೂ ಇದೇ ರೀತಿಯ ಗೊಂದಲಮಯ, ಗೋಜಲು ನಿರ್ಧಾರಗಳು.

ಒಂದೆಡೆ ಆರ್ಥಿಕತೆ ಈಗಷ್ಟೇ ಪುನಶ್ಚೇತನಗೊಳ್ಳುತ್ತಿದ್ದರೆ ಮತ್ತೊಂದೆಡೆ ಎಷ್ಟೋ ಮಂದಿಗೆ ಕೊರೊನಾ ಸಂದರ್ಭವು ಒಂದು ದಂಧೆಯಂತೆಯೇ ಭಾಸವಾಗುತ್ತಿದೆ. ರಾತ್ರಿ ಕರ್ಫ್ಯೂ ತೆಗೆದುಹಾಕುವುದು ಒಳಿತು. ಕೋವಿಡ್‌ ಮಾರ್ಗಸೂಚಿ ಪಾಲನೆ, ಜಾಗೃತಿ ಮೂಡಿಸುವಿಕೆ ಮತ್ತು ಲಸಿಕೆ ನೀಡಿಕೆ... ಇವು ಮಾತ್ರ ಪರಿಹಾರೋಪಾಯಗಳು.

- ರವಿಕುಮಾರ್ ಎನ್., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT