ಶ್ರೀಗಳವರ ಕಳಕಳಿ ಸಾಧುವಾದದ್ದು. ಆದರೆ ಅವರ ಕೆಲವು ಮಾತುಗಳಲ್ಲಿ ಆಕ್ರೋಶವಿತ್ತು, ಔಚಿತ್ಯ ಇರಲಿಲ್ಲ. ಅದರಲ್ಲಿಯೂ‘ನಾವು ಹೇಳಿದರೆ ಕುಮಾರಸ್ವಾಮಿಯೂ ಕೇಳಬೇಕು, ಅವರ ಅಪ್ಪನೂ ಕೇಳಬೇಕು. ನಮ್ಮ ಶಾಸಕರು ರಾಜೀನಾಮೆ ಕೊಟ್ಟರೆ ಕುಮಾರಸ್ವಾಮಿ ಗೊಟಕ್ ಎಂದುಬಿಡ್ತಾರೆ’ ಎಂಬ ಅಹಂಕಾರದಿಂದ ಕೂಡಿದ ಹೇಳಿಕೆಯಿಂದ ಪಾದಯಾತ್ರೆಯ ಮತ್ತು ಅದ್ಭುತ ಬೃಹತ್ ಸಮಾವೇಶದ ಘನತೆ, ಗಾಂಭೀರ್ಯವು ಕೊಚ್ಚಿ ಹೋಯಿತು. ಸರ್ಕಾರದ ಧೋರಣೆಯನ್ನು ಪ್ರಶ್ನಿಸುವ ಹಕ್ಕನ್ನು ಹರಿತವಾಗಿ ಮಂಡಿಸುವ ವಿಧಾನವಿದೆ. ತಮ್ಮ ನಡೆನುಡಿಯಲ್ಲಿ ಮಾದರಿಯಾಗಬೇಕಾದ ಗೌರವಾರ್ಹರು ಹೀಗೆ ತೂಕ ತಪ್ಪಿದ್ದು ಆಘಾತಕಾರಿಯಾದುದು.