ಹಿಂದೆಲ್ಲಾ ಸ್ನಾತಕೋತ್ತರ ಪದವೀಧರರನ್ನು ನೇರವಾಗಿ ಆಯ್ಕೆ ಮಾಡಿಕೊಂಡು ಸಂಶೋಧನೆಗೆ ಬೇಕಾದ ಮಾರ್ಗದರ್ಶನವನ್ನು ನೀಡಲಾಗುತ್ತಿತ್ತು. ಆದರೆ ಈ ಆಯ್ಕೆ ಪ್ರಕ್ರಿಯೆಯಲ್ಲಿದ್ದ ಸಮಸ್ಯೆಯನ್ನು ಮನಗಂಡ ವಿಶ್ವವಿದ್ಯಾಲಯಗಳು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡುವ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದವು. ಆದರೆ ಇತ್ತೀಚೆಗೆ ಸಂಶೋಧನಾ ಮಾರ್ಗದರ್ಶನದ ವಿಚಾರವಾಗಿ ಲಂಚ ಕೇಳುವ, ಲೈಂಗಿಕ ಶೋಷಣೆಗೆ ಗುರಿಪಡಿಸುವ ಆರೋಪ ಕೇಳಿಬರುತ್ತಿರುವುದನ್ನು ನೋಡಿದರೆ, ಸಂಶೋಧನೆ ಮತ್ತು ಸಂಶೋಧನಾ ಮಾರ್ಗದರ್ಶನದ ಮೌಲ್ಯವು ದಾರಿ ತಪ್ಪಿದೆಯೇ ಎಂಬ ಅನುಮಾನ ಮೂಡುತ್ತದೆ.