‘ಉರಿವ ಮನೆಯಲ್ಲಿಗಳ ಹಿರಿದರು’ ಎಂಬ ಗಾದೆಯು ಕೋವಿಡ್ ಸಂಕಷ್ಟದ ಈ ಕಾಲದಲ್ಲಿ ನಿಜವಾಗುತ್ತಿದೆ. ಒಂದೆಡೆ, ಕೋವಿಡ್ ಹೆಸರಿನಲ್ಲಿ ದಿನಸಿ ಅಂಗಡಿಯವರು ದಿನಸಿಗಳ ಬೆಲೆಯನ್ನು ಹೆಚ್ಚಿಸಿದ್ದರೆ, ಇನ್ನೊಂದೆಡೆ ಔಷಧ ಕಂಪನಿಯವರು ಔಷಧಗಳ ಬೆಲೆಯನ್ನು ಹೆಚ್ಚಿಸತೊಡಗಿದ್ದಾರೆ. ಲಾಕ್ಡೌನ್ ಕಾಲದಲ್ಲಿ ತಮಗೆ ಉಂಟಾದ ನಷ್ಟವನ್ನು ಸರಿದೂಗಿಸಿಕೊಳ್ಳಲು ಆಟೊದವರು ಕೂಡ ಪ್ರಯಾಣ ದರವನ್ನು ಹೆಚ್ಚಿಸಿದ್ದಾರೆ. ಕೆ.ಎಂ.ಎಫ್ ಹಾಲಿನ ದರವನ್ನು ಹೆಚ್ಚಿಸದೇ ಇದ್ದರೂ ಹಾಲನ್ನು ಮಾರುವ ರೀಟೇಲ್ ವರ್ತಕರು ಕೆಲವೆಡೆ ಪ್ಯಾಕೆಟ್ಗೆ ಒಂದು ರೂಪಾಯಿ ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದಾರೆ.