ಬರದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಬೆಲೆಬಾಳುವ ವಸ್ತುಗಳಿಗೆ ಭದ್ರತೆ ನೀಡುವ ನಾವು, ನೀರಿಗೂ ಲಾಕರ್ ವ್ಯವಸ್ಥೆ ಮಾಡಿಸಬೇಕಾದ ಸಂದರ್ಭ ಮುಂದಿನ ದಿನಗಳಲ್ಲಿ ಬರಬಹುದು. ನೀರಿನ ಮಹತ್ವ ಅರಿತು ಹನಿಹನಿ ನೀರನ್ನೂ ಎಚ್ಚರಿಕೆಯಿಂದ ಉಪಯೋಗಿಸಬೇಕು. ಕಳೆದ ವರ್ಷದ ಜಲ ದಿನದ ಘೋಷವಾಕ್ಯ ‘ನೀರಿಗಾಗಿ ನಿಸರ್ಗ’ ಎಂದಿತ್ತು. ಇದು ಮುಂದೆ ‘ನೀರಿಗಾಗಿ ಲಾಕರ್’ ಎಂದು ಬದಲಾಗುವಂತೆ ಆಗಬಾರದು.