ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವುದಕ್ಕಾಗಿ ಮಸೂದೆಯೊಂದನ್ನು ಮಂಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದು, ಸ್ವಾಗತಾರ್ಹ ನಡೆ. ಭಾಷೆಯ ವಿಚಾರದಲ್ಲಿ ದಿಟ್ಟ ನಿಲುವು ತಳೆಯಬೇಕಾದುದು ಇಂದಿನ ಅಗತ್ಯ. ಚುನಾಯಿತ ಪ್ರತಿನಿಧಿಗಳ ಬಹುಮುಖ್ಯ ಜವಾಬ್ದಾರಿಯೂ ಹೌದು. ಪಕ್ಷಭೇದ ಮರೆತು ಎಲ್ಲರೂ ಇದಕ್ಕೆ ಬೆಂಬಲವಾಗಿ ನಿಲ್ಲಬೇಕು.