ಬಂದ್ ಬದಲಿಗೆ ಶಾಂತಿಯುತ ಧರಣಿ ನಡೆಸಲು ಸಾಧ್ಯವಿಲ್ಲವೇ? ಈ ಮುಖಾಂತರ ಸರ್ಕಾರದ ಗಮನ ಸೆಳೆಯಲು ಆಗದೇ? ಕೊರೊನಾ ಮಾಡಿರುವ ದೊಡ್ಡ ಗಾಯವೇ ಸಾಕು. ಆ ಗಾಯದ ಮೇಲೆ ಇಂತಹ ಬಂದ್ಗಳಿಂದ ಮತ್ತೆ ಮತ್ತೆ ಬರೆಗಳು ಬೀಳುವುದು ಬೇಡ. ತಳ್ಳುಗಾಡಿ, ಆಟೊ, ರಸ್ತೆ ಬದಿ ವ್ಯಾಪಾರಿಗಳು ಹಾಗೂ ಜನಸಾಮಾನ್ಯರ ದಿನದ ಜೀವನವನ್ನು ಅಸ್ತವ್ಯಸ್ತಗೊಳಿಸುವ ಬಂದ್ಗೆ ಮುಕ್ತಿ ಎಂದು?