ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಮುಕ್ತಿ ಎಂದು?

Last Updated 28 ಸೆಪ್ಟೆಂಬರ್ 2020, 15:48 IST
ಅಕ್ಷರ ಗಾತ್ರ

ಸೋಮವಾರ ಕರ್ನಾಟಕ ಬಂದ್ ನಡೆದಿದೆ. ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು. ಆದರೆ ಬಂದ್‌ನಿಂದ ತೊಂದರೆಗೆ ಒಳಗಾಗುವುದು ಯಾವ ವರ್ಗದ ಜನ ಎಂಬುದನ್ನು ಬಂದ್‌ಗೆ‌ ಕರೆ ಕೊಡುವವರು ಯೋಚಿಸಬೇಕು. ಬಂದ್, ರಸ್ತೆತಡೆ ಎಂಬ ಪಿಡುಗುಗಳು ನಮ್ಮಲ್ಲಿ ರೂಢಿಗತ ಆಗಿರುವುದು ಬಹಳ ಬೇಸರ ಉಂಟುಮಾಡುವ ಸಂಗತಿ.

ಬಂದ್ ಬದಲಿಗೆ ಶಾಂತಿಯುತ ಧರಣಿ ನಡೆಸಲು ಸಾಧ್ಯವಿಲ್ಲವೇ? ಈ ಮುಖಾಂತರ ಸರ್ಕಾರದ ಗಮನ ಸೆಳೆಯಲು ಆಗದೇ? ಕೊರೊನಾ ಮಾಡಿರುವ ದೊಡ್ಡ ಗಾಯವೇ ಸಾಕು. ಆ ಗಾಯದ ಮೇಲೆ ಇಂತಹ ಬಂದ್‌ಗಳಿಂದ ಮತ್ತೆ ಮತ್ತೆ ಬರೆಗಳು ಬೀಳುವುದು ಬೇಡ. ತಳ್ಳುಗಾಡಿ, ಆಟೊ, ರಸ್ತೆ ಬದಿ ವ್ಯಾಪಾರಿಗಳು ಹಾಗೂ ಜನಸಾಮಾನ್ಯರ ದಿನದ ಜೀವನವನ್ನು ಅಸ್ತವ್ಯಸ್ತಗೊಳಿಸುವ ಬಂದ್‌ಗೆ ಮುಕ್ತಿ ಎಂದು?

ಸೋಹನ್ ಎಸ್.ಪಿ., ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT