2002ರ ಜುಲೈ 18ರ ‘ಪ್ರಜಾವಾಣಿ’ಯಲ್ಲಿ ‘ಬ್ಯಾಂಕ್ಸುಸ್ತಿದಾರರ ವಿರುದ್ಧ ಕ್ರಮಕ್ಕೆ ಆಗ್ರಹ’ ಎಂಬ ಸುದ್ದಿ ಪ್ರಕಟವಾಗಿತ್ತು. ಈ ಒತ್ತಾಯವನ್ನು ಮಾಡಿದ್ದು ಕರ್ನಾಟಕ ಬ್ಯಾಂಕ್ಎಂಪ್ಲಾಯೀಸ್ ಫೆಡರೇಷನ್. ಆಗಲೂ ಈ ಯೂನಿಯನ್
ಗಳು ‘ಆಸ್ತಿ ಪುನರ್ ನಿರ್ಮಾಣ ಕಂಪನಿ (ARC) ಸ್ಥಾಪನೆಯು ಸುಸ್ತಿದಾರರಿಗೆ ಇನ್ನಷ್ಟು ಪ್ರಯೋಜನಕಾರಿ’ ಎಂದಿದ್ದವು. ಈ ಇಪ್ಪತ್ತೈದು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಬದಲಾಗಿದೆ. ಕಾರ್ಪೊರೇಟ್ ಕಂಪನಿಗಳ ಸಾಲ ಸುಸ್ತಿಯಾ
ಗಲು, ಬಾಹ್ಯ ಕಾರಣಗಳಂತೆ ಅನೇಕ ಸಂದರ್ಭಗಳಲ್ಲಿ ಬ್ಯಾಂಕುಗಳ ಒಳಗಿನ ‘ಸಹಾಯ’ವೂ ಇರುತ್ತದೆ. ನ್ಯಾಯಾಲಯಗಳಲ್ಲಿ ಚಾರ್ಜ್ಶೀಟ್ ಆದ ಎಷ್ಟು ಜನರ ಸದಸ್ಯತ್ವವನ್ನು ಈ ಸಂಘಟನೆಗಳು ರದ್ದು ಮಾಡಿವೆ? ತಾವಾಗಿ ಏನೂ ಮಾಡದವರು, ಇತ್ತೀಚೆಗಷ್ಟೇ ಸ್ವಲ್ಪ ಗಂಭೀರವಾಗಿ ನಡೆಯುತ್ತಿರುವ ವಸೂಲಾತಿ ಕ್ರಮಗಳನ್ನು ವಿರೋಧಿಸಿದರೆ ಏನೆನ್ನಬೇಕು?