ತಮ್ಮ ಮಗ ಬಿ.ವೈ.ವಿಜಯೇಂದ್ರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಆಯಕಟ್ಟಿನ ಖಾತೆಯೇ ಬೇಕೆಂದು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಪಟ್ಟು ಹಾಕಿರುವುದಾಗಿ ವರದಿಯಾಗಿದೆ. ಇದು ನಿಜವೇ ಆಗಿದ್ದಲ್ಲಿ, ಈ ರೀತಿಯ ಪಟ್ಟು ಮತ್ತು ಬೆದರಿಕೆಗಳು ಅವರು ಅಧಿಕಾರದಲ್ಲಿದ್ದಾಗ ರಾಜ್ಯದ ಪಾಲಿನ ಜಿಎಸ್ಟಿ ಬಾಕಿ ಹಣ ಮತ್ತು ಬರ, ನೆರೆ ವಿಕೋಪಗಳ ಪರಿಹಾರ ಧನವನ್ನು ಕೇಂದ್ರದಿಂದ ತರುವ ವಿಷಯದಲ್ಲಿ ಏಕೆ ಇರಲಿಲ್ಲ? ಕುರ್ಚಿ ಉಳಿಸಿಕೊಳ್ಳಲು ಅವರು ಸೌಮ್ಯರಾಗಿ ಇದ್ದರೇ?ಪಟ್ಟು ಮತ್ತು ಬೆದರಿಕೆಗಳನ್ನು ಜನಹಿತಕ್ಕಾಗಿ ಬಳಸಬೇಕು. ಸ್ವಹಿತಕ್ಕಾಗಿ ಮಾಡುವುದು ಸ್ವಾರ್ಥ ಅನ್ನಿಸಿಕೊಳ್ಳುತ್ತದೆ.