ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಇಲ್ಲದ ಪಟ್ಟು, ಈಗ ಮಾತ್ರ ರಟ್ಟು

Last Updated 4 ಆಗಸ್ಟ್ 2021, 15:16 IST
ಅಕ್ಷರ ಗಾತ್ರ

ತಮ್ಮ ಮಗ ಬಿ.ವೈ.ವಿಜಯೇಂದ್ರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಆಯಕಟ್ಟಿನ ಖಾತೆಯೇ ಬೇಕೆಂದು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಪಟ್ಟು ಹಾಕಿರುವುದಾಗಿ ವರದಿಯಾಗಿದೆ. ಇದು ನಿಜವೇ ಆಗಿದ್ದಲ್ಲಿ, ಈ ರೀತಿಯ ಪಟ್ಟು ಮತ್ತು ಬೆದರಿಕೆಗಳು ಅವರು ಅಧಿಕಾರದಲ್ಲಿದ್ದಾಗ ರಾಜ್ಯದ ಪಾಲಿನ ಜಿಎಸ್‌ಟಿ ಬಾಕಿ ಹಣ ಮತ್ತು ಬರ, ನೆರೆ ವಿಕೋಪಗಳ ಪರಿಹಾರ ಧನವನ್ನು ಕೇಂದ್ರದಿಂದ ತರುವ ವಿಷಯದಲ್ಲಿ ಏಕೆ ಇರಲಿಲ್ಲ? ಕುರ್ಚಿ ಉಳಿಸಿಕೊಳ್ಳಲು ಅವರು ಸೌಮ್ಯರಾಗಿ ಇದ್ದರೇ?ಪಟ್ಟು ಮತ್ತು ಬೆದರಿಕೆಗಳನ್ನು ಜನಹಿತಕ್ಕಾಗಿ ಬಳಸಬೇಕು. ಸ್ವಹಿತಕ್ಕಾಗಿ ಮಾಡುವುದು ಸ್ವಾರ್ಥ ಅನ್ನಿಸಿಕೊಳ್ಳುತ್ತದೆ.

-ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT